

ಬೆಳ್ತಂಗಡಿ; ಉಜಿರೆ ಟಿ. ಬಿ ಕ್ರಾಸ್ ನಲ್ಲಿ ವಾಹನ ತೊಳೆಯುತ್ತಿದ್ದ ವೇಳೆ ನೀರು ಹಾಯಿಸುವ ಗನ್ ಮೂಲಕ ವಿದ್ಯುತ್ ಹರಿದು ಶಾಕ್ ಹೊಡೆದು ಅದರಲ್ಲಿಯೇ ಸಿಲುಕಿಕೊಂಡ ವ್ಯಕ್ತಿಯನ್ನು ಸ್ಥಳೀಯರು ಸಾಹಸಿಕವಾಗಿ ರಕ್ಷಿಸದ್ದಾರೆ.
ಇಲ್ಲಿನ ನಿವಾಸಿ ಸಾದಿಕ್ ಎಂಬಾತ ವಾಹನ ತೊಳೆಯುತ್ತಿದ್ದ ವೇಳೆ ವಿದ್ಯುತ್ ಗೆ ಆಘಾತಕ್ಕೆ ಈಡಾಗಿದ್ದಾರೆ. ಈ ಸಂದರ್ಭದಲ್ಲಿ ಇದನ್ನು ಗಮನಿಸಿದ ಸ್ಥಳೀಯರಾದ ಉಸ್ಮಾನ್ , ಮನ್ಸೂರ್, ಹಮೀದ್ ಹಾಗೂ ಹಾರಿಸ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ವಿದ್ಯುತ್ ಆಘಾತಕ್ಕಡ ಈಡಾಗಿ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಇದೀಗ ಆತನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ
