


ಬೆಳ್ತಂಗಡಿ; ಬಳೆಂಜ ಗ್ರಾಮದ ದರ್ಬೆ ಎಂಬಲ್ಲಿ ಗಾಳಿ ಮಳೆಗೆ ಮನೆಯ ಹಂಚು ಹಾರಿ ಹೋಗಿ ಸಂಕಷ್ಟದಲ್ಲಿದ್ದ ಮನೆಯವರಿಗೆ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮತಿ ನೆರವಿಗೆ ಬಂದಿದ್ದು ಮನೆಯ ತಾತ್ಕಾಲಿಕ ದುರಸ್ತಿ ಮಾಡಿಕೊಟ್ಟಿದ್ದಾರೆ.
ಮನೆಗೆ ಹಾನಿಯಾಗಿರುವುದು ತಿಳಿದ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರುಗಳಾದ ಮುಸ್ತಾಫ ಕಟ್ಟೆ, ಸದಾನಂದ ತೋಟದ ಪಲ್ಕೆ, ಪುರುಷೋತ್ತಮ ಆಚಾರಿ, ಹಾಗೂ ಇತರರು ಸೇರಿ ಅಗತ್ಯವಿರುವ ಹಂಚುಗಳನ್ನು ತಂದು ಗಾಳಿಗೆ ಹಾನಿಗೀಡಾಗಿದ್ದ ಮನೆಯ ಮೇಲ್ಛಾವಣಿಯ ನ್ನು ದುರಸ್ತಿ ಮಾಡಿ ಕೊಟ್ಟಿದ್ದಾರೆ.
