



ಬೆಳ್ತಂಗಡಿ; ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಏರ್ಕ್ರಾಫ್ಟ್ ಎಂಜಿನಿಯರಿಂಗ್ ಪ್ರವೇಶ ಮೈಂಟೆನೆನ್ಸ್ ಸಾಮಾನ್ಯ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡಿದ್ದಾರೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳಾದ ಧ್ರುವ ಅನೂಪ್, ಮನ್ವಿತ್ ಎಂ.ಬಿ.,
ರೋಹಿತ್, ವರ್ಷಿತಾ
ಗೌತಮ್ ಎಸ್., ಇಂಚರಾ ಟಿ.ಆರ್., ನೇಹನ್ ಯು., ವರ್ಷಿತಾ ಎಲ್.ಬಿ., ರೋಹಿತ್ ಎಂ., ಶ್ರೀಲಕ್ಷ್ಮೀ ಅವರು ರ್ಯಾಂಕ್ ಪಡೆದುಕೊಂಡು, ರಾಷ್ಟ್ರ ಮಟ್ಟದ ಸ್ಕಾಲರ್ ಶಿಪ್ಗೆ ಅರ್ಹರಾಗಿದ್ದಾರೆ.
ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಿನ್ಸಿಪಾಲ್, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.
